Close Menu
    Facebook X (Twitter) Instagram
    The Prime Voice
    • Home
    • Politics
    • Sports
    • Crime
    • Entertainment
    • English
      • English
    The Prime Voice
    Home»Crime»“ರೇಷನ್ ವ್ಯವಸ್ಥೆಯಲ್ಲಿ ಭಾರೀ ಗೋಲ್‌ಮಾಲ್: ಬೆಂಗಳೂರಿನಲ್ಲಿ ಲೋಕಾಯುಕ್ತ ಶಾಕ್!”
    Crime

    “ರೇಷನ್ ವ್ಯವಸ್ಥೆಯಲ್ಲಿ ಭಾರೀ ಗೋಲ್‌ಮಾಲ್: ಬೆಂಗಳೂರಿನಲ್ಲಿ ಲೋಕಾಯುಕ್ತ ಶಾಕ್!”

    SandeshBy SandeshJune 13, 2026Updated:June 13, 2026No Comments1 Min Read
    Facebook Twitter Pinterest LinkedIn Tumblr Email
    Share
    Facebook Twitter LinkedIn Pinterest Email

    ಬೆಂಗಳೂರು: ಪಡಿತರ ಅಕ್ಕಿ ಹಾಗೂ ಆಹಾರ ಧಾನ್ಯ ವಿತರಣೆಯಲ್ಲಿ ಭಾರೀ ಅಕ್ರಮ ನಡೆದಿರುವ ಶಂಕೆ ಹಿನ್ನೆಲೆ ಲೋಕಾಯುಕ್ತ ಪೊಲೀಸರು ಬೆಂಗಳೂರಿನ 22 ಹಾಗೂ ಬೆಂಗಳೂರು ಗ್ರಾಮಾಂತರದ 5 ಸೇರಿ ಒಟ್ಟು 27 ಆಹಾರ ನಿಗಮದ ಗೋದಾಮುಗಳ ಮೇಲೆ ಏಕಕಾಲದಲ್ಲಿ ದಾಳಿ ನಡೆಸಿದ್ದಾರೆ.

    ದಾಳಿಯ ವೇಳೆ ಹಲವು ಗೋದಾಮುಗಳಲ್ಲಿ ದಾಖಲೆಗಳು ಮತ್ತು ನೈಜ ದಾಸ್ತಾನು ನಡುವೆ ಗಂಭೀರ ವ್ಯತ್ಯಾಸಗಳು ಪತ್ತೆಯಾಗಿವೆ. ಶಾಂತಿನಗರ ಗೋದಾಮಿನಲ್ಲಿ ಸುಮಾರು 1,130 ಅಕ್ಕಿ ಮೂಟೆಗಳ ಲೆಕ್ಕದಲ್ಲಿ ವ್ಯತ್ಯಾಸ ಕಂಡುಬಂದಿದ್ದು, ಅಧಿಕಾರಿಗಳು ಸಮರ್ಪಕ ಉತ್ತರ ನೀಡಲು ವಿಫಲರಾಗಿದ್ದಾರೆ.

    ಬೊಬ್ಬನಹಳ್ಳಿ ಗೋದಾಮಿನಲ್ಲಿ ಸುಮಾರು 25 ಟನ್ ಅಕ್ಕಿಯನ್ನು ಲಾರಿಗೆ ಲೋಡ್ ಮಾಡುತ್ತಿರುವುದು ಪತ್ತೆಯಾಗಿದ್ದು, ಅಕ್ರಮ ಸಾಗಣೆ ಶಂಕೆ ವ್ಯಕ್ತವಾಗಿದೆ. ಬಸವನಗುಡಿ ಗೋದಾಮಿನಲ್ಲಿ ದಾಖಲೆ ಮತ್ತು ದಾಸ್ತಾನು ನಡುವೆ ಹೊಂದಾಣಿಕೆ ಇಲ್ಲದಿರುವುದು ಬೆಳಕಿಗೆ ಬಂದಿದೆ.

    ಹನುಮಂತನಗರ ಗೋದಾಮಿನಲ್ಲಿ ದಾಖಲೆಗಳಲ್ಲಿ ಉಲ್ಲೇಖಿಸಿದಷ್ಟು ಅಕ್ಕಿ ಮತ್ತು ರಾಗಿ ದಾಸ್ತಾನು ಲಭ್ಯವಿಲ್ಲದಿರುವುದು ಪತ್ತೆಯಾಗಿದೆ. ಹಲವು ಗೋದಾಮುಗಳಲ್ಲಿ ಹಮಾಲಿ ಕಾರ್ಮಿಕರಿಗೆ ಜೀವ ವಿಮೆ, ಇಎಸ್‌ಐ ಹಾಗೂ ಪಿಎಫ್ ಸೌಲಭ್ಯಗಳನ್ನು ನೀಡದೇ ಕಾರ್ಮಿಕರ ಹಕ್ಕುಗಳನ್ನು ಉಲ್ಲಂಘಿಸಿರುವ ಆರೋಪವೂ ಕೇಳಿಬಂದಿದೆ.

    ದಾಳಿ ವೇಳೆ ವಶಪಡಿಸಿಕೊಂಡ ದಾಖಲೆಗಳು ಮತ್ತು ಹಣಕಾಸು ವ್ಯವಹಾರಗಳ ಪರಿಶೀಲನೆಯನ್ನು ಲೋಕಾಯುಕ್ತ ಅಧಿಕಾರಿಗಳು ಮುಂದುವರಿಸಿದ್ದು, ಅಕ್ರಮಗಳಲ್ಲಿ ಭಾಗಿಯಾಗಿರುವ ಅಧಿಕಾರಿಗಳು ಹಾಗೂ ಸಿಬ್ಬಂದಿ ವಿರುದ್ಧ ಕಾನೂನು ಕ್ರಮ ಜರುಗುವ ಸಾಧ್ಯತೆ ಇದೆ.

     

    Post Views: 156
    Share. Facebook Twitter Pinterest LinkedIn Tumblr Email
    Avatar photo
    Sandesh

    Related Posts

    ಜೇಬಿಗೆ ಹಣ ಹಾಕುತ್ತಿದ್ದಂತೆ ಎಂಟ್ರಿ ಕೊಟ್ಟ ಲೋಕಾಯುಕ್ತ; ಆರ್‌ಐ ಅರೆಸ್ಟ್!

    June 13, 2026

    ಧರ್ಮಸ್ಥಳ ಪ್ರಕರಣಕ್ಕೆ ನನ್ನ ಸಂಬಂಧವಿಲ್ಲ; ವೈರಲ್ ಸುದ್ದಿಗಳಿಗೆ ಪ್ರಕಾಶ್ ರಾಜ್ ತಿರುಗೇಟು

    June 12, 2026

    Bengaluru Crime: ವೆನ್ನೆಲಾ ಕೊಲೆ ಕೇಸ್‌ಗೆ ಬಿಗ್ ಟ್ವಿಸ್ಟ್: ಮೂವರು ಪೊಲೀಸ್ ಅಧಿಕಾರಿಗಳು ಸಸ್ಪೆಂಡ್!

    June 12, 2026
    Leave A Reply Cancel Reply

    Recent Posts

    • IAF AN-32 ವಿಮಾನ ಪತನ: ಲ್ಯಾಂಡಿಂಗ್ ವೇಳೆ ಭೀಕರ ದುರಂತ, 5 ಭಾರತೀಯ ವಾಯುಸೇನಾ ಸಿಬ್ಬಂದಿ ಸಾವು!
    • “ರೇಷನ್ ವ್ಯವಸ್ಥೆಯಲ್ಲಿ ಭಾರೀ ಗೋಲ್‌ಮಾಲ್: ಬೆಂಗಳೂರಿನಲ್ಲಿ ಲೋಕಾಯುಕ್ತ ಶಾಕ್!”
    • ಅಜಿತ್ ಸಂಭಾವನೆಗೆ ನಿರ್ಮಾಪಕರ ಶಾಕ್: ‘AK64’ ಘೋಷಣೆ ಮತ್ತೆ ಮುಂದೂಡಿಕೆ?
    • INDIA VS PAK ಮಹಿಳೆಯರು ICC T20I ವಿಶ್ವಕಪ್
    • ‘ರಣವೀರ್‌ರನ್ನು ಉದ್ದೇಶಪೂರ್ವಕವಾಗಿ ಟಾರ್ಗೆಟ್ ಮಾಡಲಾಗುತ್ತಿದೆ’: ಬಾಲಿವುಡ್ ಸಂಸ್ಕೃತಿಗೆ ಕಂಗನಾ ತಿರುಗೇಟು

    Recent Comments

    No comments to show.

    Archives

    • June 2026
    • April 2026
    • March 2026
    • August 2025

    Categories

    • Crime
    • Entertainment
    • Home
    • National
    • Politics
    • Sports
    Facebook X (Twitter) Instagram Pinterest
    Copyright © 2026 The Prime Voice. All Rights Reserved.

    Type above and press Enter to search. Press Esc to cancel.